ವಚನ - 1774     
 
ವನವೊಂದರಲ್ಲಿ ಘನಕಾಸಾರ ಬೆಳೆದುದ ಕಂಡೆ. ಆ ಘನಕಾಸಾರದಲ್ಲಿ ಮೂರು ಹೂಗಳ ಕಂಡೆ. ಆ ಮೂರು ಹೂಗಳಲ್ಲಿ ಮೂರು ಮೂರ್ತಿಗಳ ಕಂಡೆ. ಆ ಮೂರು ಮೂರ್ತಿಗಳಲ್ಲಿ ಮೂಲೋಕದರಸ ಕಪಿಲಸಿದ್ಧಮಲ್ಲಿಕಾರ್ಜುನನ ಕಂಡು ಕಣ್ದೆರೆದು ಕಂಡೆ, ಕಂಡೆ, ಕಂಡೆಯಾ ಕೇದಾರ ಗುರುವೆ.