ವಚನ - 1796     
 
ಅಲ್ಲಿರುವಾತನ ರೂಹು ನೀವಲ್ಲೆಂಬಡೆ, ಅಲ್ಲಿರುವಾತನ ರೂಹು ದೇವಾಲಯವ ತೆಗೆಸರಯ್ಯಾ. ಅಲ್ಲಿಯ ರೂಹು ಇಲ್ಲಿಯ ರೂಹು ಕಪಿಲಸಿದ್ಧಮಲ್ಲಿಕಾರ್ಜುನನೆಂದು ಕಂಡೆನು ಅಲ್ಲಮದೇವಾ, ಇನ್ನಾದರೂ ಕರುಣಿಸಯ್ಯಾ.