ವಚನ - 1870     
 
ಭವ ಭರ್ಗ ಭೀಮ ನೀಲಲೋಹಿತ ವಿರೂಪಾಕ್ಷ ಎನ್ನು ಮನವೆ. `ನೀಲಕಂಠ ಮಾಪತಿ ದಯಾಳು ದಯಾಸಾಗರ' ಎನ್ನು ಮನವೆ. `ಉಗ್ರ ಕಪರ್ದಿ ಕೈಲಾಸವಾಸಿ ಸಿತಕಂಠ ಭಾಳಲೋಚನ' ಎನ್ನು ಮನವೆ. `ಕಾಲಾರಿ ಕಾಮಾರಿ ತ್ರಿಪುರಾರಿ ಪಾಪಾರಿ ಕಪಿಲಸಿದ್ಧಮಲ್ಲಿಕಾರ್ಜುನ' ಎನ್ನು ಮನವೆ.