ವಚನ - 1902     
 
ಕಾಯ್ದ ಕರ್ಬುನ ನೀರನೊಳಕೊಂಬಂತೆ, ಬಿದ್ದ ಬಿಂದುವ ಭೂಮಿಯೊಳಕೊಂಬಂತೆ, ನವನೀತ ಘೃತವನೊಳಕೊಂಬಂತೆ, ವೀಳ್ಯ ರಸವೊಳಕೊಂಬಂತೆ, ಎನ್ನ ಕಾಯವ ತನ್ನ ಕಾಯದಲ್ಲಿ ಒಳಕೊಂಬ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಶರಣನ.