ವಚನ - 1920     
 
ಸಾಂಬನಾಗಲಿ, ಶಿವನೆ ತಾನಾಗಲಿ, ಪಂಚಭೌತಿಕಕ್ಕೆ ಬಂದ ಬಳಿಕ ಕೇಡೆಂಬುದು ನಿಶ್ಚಯ. ಭೌತಿಕದಲ್ಲಿ ಕೇಡು ನಿಶ್ಚಯವಲ್ಲದೆ, ಮಹಾ ಅರುಹಿನಲ್ಲಿ ಕೇಡಿಲ್ಲ. `ತತ್ತ್ವಾತ್ಮಕಂ ವಪುರ್ದೇವಿ ನಾಶಾರ್ಥಂ ಕಾರಣಂ ದೃಢಂ' ಎಂಬುದು ಪುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.