ವಚನ - 1958     
 
ಮಾಡಿದವನ ಹೆಸರು ಮಣ್ಣಿನಲ್ಲಿ; ಮಣ್ಣು ಮಾಡಿದವನ ಹೆಸರು ಮೂಲೋಕದಲ್ಲಿ. ಮಾಡಿದನೆಂಬುದು ಮನದ ಗುಣ; ಮಾಡಿದವನವನೆಂಬುದು, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ಗುಣ, ಮಡಿವಾಳಯ್ಯ ಸಾಕ್ಷಿಯಾಗಿ.