ವಚನ - 185     
 
ಅರಿದರಿದು ಅರಿವು ಬರುದೊರೆವೋಯಿತ್ತು. ಕುರುಹ ತೋರಿದೊಡಿಂತು ನಂಬರು. ತೆರಹಿಲ್ಲದ ಘನವ ನೆನೆದು ಗುರು ಶರಣು ಶರಣೆಂಬುದಲ್ಲದೆ, ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ.