ವಚನ - 401     
 
ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು, ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ವಸ್ಥಿರವಾಯಿತ್ತು. ಸಹಜದುದಯದ ನಿಲವಿಂಗೆ, ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ ಗುಹೇಶ್ವರಾ ನಿಮ್ಮ ಶರಣನನುಪಸುಖಿಯಾಗಿದ್ದನು.