ವಚನ - 428     
 
ಭಕ್ತಂಗೆ ಉತ್ಪತ್ಯವಿಲ್ಲಾಗಿ, ಸ್ಥಿತಿಯಿಲ್ಲ. ಸ್ಥಿತಿಯಿಲ್ಲಾಗಿ ಲಯವಿಲ್ಲ. ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ, ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.