ವಚನ - 504     
 
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ! ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತಲ್ಲಾ. ರವಿಯ ಶೃತಿಗಳ ರಥದಚ್ಚು ಮುರಿಯಿತ್ತು! ಶಶಿ ವಂಶದ ನಿಲವನು ರಾಹುಗೆದ್ದುದ ಕಂಡು ಹಿರಿಯರುಗಳು ಹೊಲಬುಗೆಟ್ಟರು ಗುಹೇಶ್ವರಾ.