ವಚನ - 515     
 
ಕಾಯವೆ ಸತ್ತು ಮಾಯವೆ ಉಳಿಯಿತ್ತು. ಎರಡರ ಸುಖದುಃಖವನರಿಯರು ನೋಡಾ. ಅದೇನೆಂದರಿಯರು, ಅದೆಂತೆಂದರಿಯರು ನೋಡಾ. ಹಿರಿಯರೆಲ್ಲಾ ವೃಥಾಯ ಹೋದರು ನೋಡಾ. ಕಣ್ಣ ಮುಂದಣ ಕಪ್ಪ ಕಳೆಯಲರಿಯರು ನೋಡಾ. ಗುಹೇಶ್ವರನೆಂಬ ಶಬ್ದಕ್ಕೆ ನಾಚರು ನೋಡಾ!