ವಚನ - 856     
 
ಆಕಾರನಿರಾಕಾರವೆಂಬೆರಡೂ ತಾನೆ, ದಿಟ ದಿಟ ತಪ್ಪದು ಕೇಳಾ. ಆಕಾರಕ್ಕೆ ಭಾವವೆ ಪ್ರಾಣ ನಿರಾಕಾರಕ್ಕೆ ಮಹಾಜ್ಞಾನವೆ ಪ್ರಾಣ ಇಂತೀ ಉಭಯಕುಳಕ್ಕೆ ಇದು ಲಕ್ಷಣ ಕೇಳಾ. ಎರಡರೊಳಗೆ ಆವ ಮುಖದಲ್ಲಿ ಇಪ್ಪಾತನು, ಆ ಮುಖದಲ್ಲಿ ಶುದ್ಧನಾಗದನ್ನಕ್ಕರ ಗುಹೇಶ್ವರಲಿಂಗಕ್ಕೆ ದೂರ ಕೇಳಾ ಸಂಗನಬಸವಣ್ಣಾ.