ವಚನ - 93     
 
ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ, ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ. ಲಿಂಗ ಬಂದು ಉಂಬಡೆ, ಪ್ರಸಾದ ಕಾಯವಪ್ಪಡೆ, ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ. ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ. ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು, ರಸವುಂಡ ಹೊನ್ನು, ಗುಹೇಶ್ವರಾ ನಿಮ್ಮ ಶರಣ!