ವಚನ - 237     
 
ದೃಷ್ಟಿವರಿದು ಮನ ನೆಲೆಗೊಂಡುದಿದೇನೊ? ಆವನೆಂದರಿಯೆ ಭಾವನಟ್ಟುದವ್ವಾ. ಕಳೆವರಿದು ಅಂಗ ಗಸಣಿಯಾದುದವ್ವಾ. ಇನ್ನಾರೇನೆಂದಡೆ ಬಿಡೆನು ಚೆನ್ನಮಲ್ಲಿಕಾರ್ಜುನಲಿಂಗವ.