ವಚನ - 271     
 
ಪಂಚೇಂದ್ರಿಯ ಸಪ್ತಧಾತು ಅಷ್ಟಮದ, ಕೊಂದು ಕೂಗಿತಲ್ಲಾ! ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ! ಮಹಾ ಋಷಿಯರ ತಪವ ಕೆಡಿಸಿ, ಕೊಂದು ಕೂಗಿತಲ್ಲಾ! ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ.