ವಚನ - 1021     
 
ಓಂ ನಮಃ ಶಿವಾಯ' ಎಂಬ ದೇವರಿರಲು ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ. ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ, ಅಂಗ ಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ, ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ ನೇಮದೊಳಗಿದು ಸಲ್ಲದು! ಗುಹೇಶ್ವರಾ ನಿಮ್ಮ ಶರಣರ ಸಂಬಂಧ ತೋರದು ತೋರದು ಬಹುಮಖಿಗಳಿಗೆ.