ವಚನ - 1067     
 
ಕಾಮನ ಕಣ್ಣ ಮುಳ್ಳ ಕಳೆದು, ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರು ನಿಂದ ನಿಲವನು ಉಪವಸಬಾರದು ಕಾಣಾ ಸಂಗನಬಸವಣ್ಣ.