ವಚನ - 1079     
 
ಕಾಯಗೊಂಡು ಹುಟ್ಟಿದವರು ದೇವರಾದಡಾಗಲಿ ಈವರಾದಡಾಗಲಿ ಮಾಯೆಯ ಸಾಧಿಸಿ ಗೆಲುವುದರಿದು ನೋಡಾ! ಮನದ ತಮಂಧವ ಗೆಲಿದು, ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ. ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ ಹಿರಿಹಿರಿದಾಗಿ ಕಾಡುವುದು ನೋಡಾ ಮರಹು! ಸಂಗನಬಸವಣ್ಣಾ, ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ.