ವಚನ - 1161     
 
ಗುರುವಿನಿಂದಾದ ಕಾಯವ ಬೆರಸಿ, ಗುರುವನರಿಯದಾದೆನಯ್ಯಾ. ಲಿಂಗದಿಂದಾದ ಜೀವವ ಬೆರಸಿ, ಲಿಂಗವನರಿಯದಾದೆನಯ್ಯಾ. ಜಂಗಮದಿಂದಾದ ಮನವ ಬೆರಸಿ, ಜಂಗಮವನರಿಯದಾದೆನಯ್ಯಾ. ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ ಸಂಗನಬಸವಣ್ಣನ ಬೆರಸಿ ನೀನು ನಾನು ಬದುಕಿದೆವು ಕಾಣಾ ಗುಹೇಶ್ವರಾ.