ವಚನ - 1244     
 
ತೆರಹಿಲ್ಲದ ಘನವ ಮನ ಒಳಕೊಂಡು ಆ ತಲಹಿಲ್ಲದ ಮನವ ಘನ ಒಳಕೊಂಡು ತನಗೆ ತಾ ತರಹರವಾದ ಬಳಿಕ ಇನ್ನು ಮರಳಿ ಇಂಬುಗೊಡಲುಂಟೆ? ಗುಹೇಶ್ವರನ ಲೀಲೆ ಮಾಬನ್ನಕ್ಕರ ಉರಿಯೊಳಗಣ ಕರ್ಪುರದಂತಿರಬೇಕು ಕಾಣಾ ಸಿದ್ಧರಾಮಯ್ಯಾ.