ವಚನ - 1323     
 
ಪಂಚಭೂತ ತ್ರಿಗುಣವನು ಸಂಚರಿಸಿ ರವಿಶಶಿಯ ಅಂತು ಕೂಡದ ರಜಬೀಜ ಬದ್ಧ ಬಂಧವಾಯಿತ್ತೊ! ಸಂಗತಿಯಿಲ್ಲದವನಲ್ಲ, ಪವನಗತಿಯ ನಡೆವವನಲ್ಲ. ಭೇದಿಸುತ್ತಿದ್ದಿತು ಲೋಕವೆಲ್ಲ ಆತನ! ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ? ಇನ್ನೇನೆಂದು ಉಪಮಿಸುವೆ ಗುಹೇಶ್ವರಾ ಸಿದ್ಧರಾಮನ ನಾಮವನು?