ವಚನ - 1390     
 
ಭಕ್ತ ಜಂಗಮದ ಷಟ್‍ಸ್ಥಲದ, ಸಕೀಲ ಸಂಬಂಧವನಾರು ಬಲ್ಲರು ಹೇಳಾ. ಅದೇನು ಕಾರಣವೆಂದಡೆ: ಹುಸಿವುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಹೇಶ್ವರನಲ್ಲ. ಆಸೆಯುಳ್ಳವ ಪ್ರಸಾದಿಯಲ್ಲ, ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ. ತನುಗುಣವುಳ್ಳವ ಶರಣನಲ್ಲ, ಜನನ-ಮರಣವುಳ್ಳವ ಐಕ್ಯನಲ್ಲ. ಈ ಆರರ ಅರಿವಿನ ಅರ್ಥದ, ಸಂಪತ್ತಿನ ಭೋಗ ಹಿಂಗಿದರೆ, ಸ್ವಯಂ ಜಾತನೆಂಬೆ ಆ ದೇಹ ನಿಜದೇಹವೆಂಬೆ, ಆ ದೇಹ ಗುರುಗುಹೇಶ್ವರನೆಂಬೆ.