ವಚನ - 1527     
 
ಶ್ರೀಮನ್ಮನದ ಕೊನೆಯಿಂದ ನೆನೆದ ನೆನಹು ಜನನ ಮರಣ ನಿಲಿಸಿತ್ತು. ಜ್ಞಾನಜ್ಯೋತಿಯ ಉದಯ, ಭಾನುಕೋಟಿಯ ಮೀರಿ ಸ್ವಾನುಭಾವದುದಯ, ಜ್ಞಾನಶೂನ್ಯದೊಳಡಗಿದ ಭೇದವನು ಏನೆಂಬೆನು ನೋಡಾ ಗುಹೇಶ್ವರಾ?