ವಚನ - 1572     
 
ಸೆರಗ ಹಿಡಿದನು, ಸೀರೆಯ ಹರಿದನು. ಹುಟ್ಟ ಮುರಿದನು ಕಂದಲನೊಡೆದನು. ಭಂಡನವ್ವಾ ಲಜ್ಜೆಭಂಡನವ್ವಾ ಕಂಡಡೆ ನುಡಿಸದಿರು ಎಲೆ ಮಾಯಾದೇವಿ. ಆಯುಷ್ಯ ಹಿರಿದು ಭವಿಷ್ಯ ಕಿರಿದು, ಭವಗೆಟ್ಟು ಹೋದ ಗುಹೇಶ್ವರ ಅಲ್ಲಯ್ಯಂಗೆ ಮೂಗಿಲ್ಲ ತಂಗಿ.