ವಚನ - 1575     
 
ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಚಲಿಸದೋಸರಿಸದೆ ನಿಟ್ಟೆಲುವು ನೆಟ್ಟನೆ ಮಾಡಿ, `ಅಧೋಗಮನ' ವಾಯುವನೂರ್ಧ್ವಮುಖವಂ ಮಾಡಿ ಮನ ಶಕ್ತಿ ಸಂಧಾನಗೊಳಿಸಿ, ಚತುಃಪದ ಮಧ್ಯ ಪೀಠದೊಳಿಪ್ಪ ಜ್ಯೋತಿರ್ಮಯಲಿಂಗವಂ, ಕಾಣುತ್ತಿರಲಾ ಬೆಳಗು ಮೂರು ಲೋಕವನ್ನಾವರಿಸಿ ಕತ್ತಲೆ ಹರಿದು ಬೆಳಗುಳಿದು, ಉದಯಾಸ್ತಮಾನವೆಂಬೆರಡರಿಯದಿರ್ದೆ ಗುಹೇಶ್ವರಾ.