ವಚನ - 206     
 
ಮನದ ಸುಖವ ಕಂಗಳಿಗೆ ತಂದರೆ, ಕಂಗಳ ಸುಖವ ಮನಕ್ಕೆ ತಂದರೆ, ನಾಚಿತ್ತು, ಮನ ನಾಚಿತ್ತು. ಸ್ಥಾನಪಲ್ಲಟವಾದ ಬಳಿಕ ವ್ರತಕ್ಕೆ ಭಂಗ ಗುಹೇಶ್ವರಾ.