ವಚನ - 261     
 
ಪಂಚೀಕೃತವೆಂಬ ಪಟ್ಟಣದೊಳಗೆ; ಈರೈದು ಕೇರಿ, ನಾಲ್ಕೈದು ವೀದಿ, ಅಲ್ಲಿ ಹಾವ ಕಂಡೆ. ಹಿಂಡುಗಟ್ಟಿ ಆಡುವ ಮದಗಜವ ಕಂಡೆ! ಕೇಸರಿಯ ಕಂಡು ಮನ ಬೆದರಿತ್ತು ನೋಡಾ. ಮೂವರರಸಿಂಗೆ ಇಪ್ಪತ್ತೈದು ಪರಿವಾರ, ಅಂಜಂಜಿ ಬೆಳಗಾಯಿತ್ತು ಗುಹೇಶ್ವರಾ.