ವಚನ - 33     
 
ಅಡವಿಯೊಳಗೆ ಕಳ್ಳರು ಕಡವಸದ ಸ್ವಾಮಿಯನು ಹುಡುಕಿ ಹುಡುಕಿ ಅರಸುತ್ತೈದಾರೆ, ಸೊಡರು ನಂದಿ ಕಾಣದೆ! ಅನ್ನಪಾನದ ಹಿರಿಯರೆಲ್ಲರು ತಮ್ಮ ತಾವರಿಯದೆ, ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ. ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು, ಅಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ, ಗುಹೇಶ್ವರಾ.