ವಚನ - 352     
 
ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು? ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ, ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ? ಗುಹೇಶ್ವರಾ, ನಿಮ್ಮ ಶರಣರು, ಬಾರದ ಭವದಲ್ಲಿ ಬಂದ ಕಾರಣ ಸುಖಿಗಳಾದರಯ್ಯಾ.