ವಚನ - 494     
 
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು. ಆ ಕೆರೆಗೆ ಏರಿ ಮೂರು, ಅಲ್ಲಿ ಒಳಗೆ ಹತ್ತು ಬಾವಿ, ಹೊರಗೆ ಐದು ಬಾವಿ! ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ ಆಕಾಶವೆಲ್ಲ ಜಲಮಯವಾಗಿತ್ತು! ತುಂಬಿದ ಜಲವನುಂಡುಂಡು ಬಂದು ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ.