ವಚನ - 527     
 
ಹುಸಿಯುಳ್ಳಾತ ಭಕ್ತನಲ್ಲ, ಬಾಧೆಯುಳ್ಳಾತ ಜಂಗಮವಲ್ಲ, ಆಸೆಯುಳ್ಳಾತ ಶರಣನಲ್ಲ. ಇಂತಪ್ಪ ಆಸೆ ಹುಸಿ ಬಾಧೆಯ ನಿರಾಕರಿಸಿ ಇರಬಲ್ಲಡೆ– ಗುಹೇಶ್ವರಾ ನಿಮ್ಮ ಶರಣ.