ವಚನ - 544     
 
ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ ಇಲ್ಲಿಂದತ್ತಲೆ ನೋಡಾ. ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು, ಲಿಂಗಸನ್ನಿಹಿತ ಅಪಾರಮಹಿಮನು ನೋಡಾ. ಸುರಾಸುರರೆಲ್ಲರು ನಿಮ್ಮ ವಶದಲ್ಲಿ ಸಿಲುಕಿದರು! ಸರಸದೊಳಗಲ್ಲ ಹೊರಗಲ್ಲ ಕೇಳಭವ ಗುಹೇಶ್ವರ.