ವಚನ - 644     
 
ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ, ದ್ಯಷ್ಟಿವಾಳಕ ತಾನಲ್ಲ. ಬೇರೊಂದ ವಿವರಿಸಿಹೆನೆಂದಡೆ, ಆರ ಮೀರಿದಲ್ಲದೆ ಅರಿಯಬಾರದು. ಅರಿವನರಿದು ಮರಹ ಮರೆಯದೆ, ಮನದ ಬೆಳಗಿನೊಳಗಣ ಪರಿಯನರಿಯದೆ ವಾದಿಸಿ ಕೆಟ್ಟು ಹೋದರು ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ!