ವಚನ - 676     
 
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು. ಹೇಳಲೆಂತೂ ಬಾರದು, ಕೇಳಲೆಂತೂ ಬಾರದು. ಎಂತಿರ್ದುದಂತೆ! ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ ಗುಹೇಶ್ವರಾ?