ವಚನ - 825     
 
ಅರಿಯದೆ ಅರಸಿದಡೆ ಮನದ ವಿಕಾರ, ಸುಳಿದರಸಿದಡೆ ಪವನವಿಕಾರ, ನಿಂದರಸಿದಡೆ ದೇಹವಿಕಾರ, ಒಳಗನರಸಿದಡೆ ಜ್ಞಾನವಿಕಾರ. ಅರಸದೆ ಬೆರಸಿದಡೆ ಆತನೆ ಶರಣ ಗುಹೇಶ್ವರಾ.