ವಚನ - 887     
 
ಆದಿಯ ತೋರಿದೆ, ಅನಾದಿಯನರುಹಿದೆ ಬಸವಣ್ಣ. ಇಹವ ಕೆಡಿಸಿದೆ ಪರವ ನಿಲಿಸಿದೆ ಬಸವಣ್ಣ. ಕಾಯಪ್ರಸಾದ ಭಾವಪ್ರಸಾದ ಜ್ಞಾನಪ್ರಸಾದವನು ಏಕವ ಮಾಡಿ ತೋರಿದ ಬಸವಣ್ಣ. ಪರವನೊಳಕೊಂಡು ಪರಿಣಾಮದಲ್ಲಿರಿಸಿದ. ಗುಹೇಶ್ವರನ ಶರಣ ಸಂಗನಬಸವಣ್ಣನ ಪೂರ್ವಾಪರವ ಹೇಳಿ ಎನ್ನನುಳಿಹಿಕೊಳ್ಳಾ ಚನ್ನಬಸವಣ್ಣಾ.