ವಚನ - 901     
 
ಆನು ನೀನೆಂದ ಬಳಿಕ, ಮತ್ತೆ ಏನೂ ಇಲ್ಲ ಇಲ್ಲಾದುದಿಲ್ಲಾದುದೆಂತಿಪ್ಪುದೊ? ತನ್ನ ಮರೆದು ಘನವ ಬೆರೆದಡೆ, ಭವರಹಿತನು ಗುಹೇಶ್ವರಯ್ಯ ತಾನೆ.