ವಚನ - 949     
 
ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ ಹದಿನಾಲ್ಕು ಭುವನದೊಳಗೆಲ್ಲಾ, `ನಾವು ಬಲ್ಲೆವು, ನಾವು ಹಿರಿಯರು, ನಾವು ಘನಮಹಿಮರು' ಎಂಬರೆಲ್ಲಾ ಮತ್ತೆ ಸಾವರೆ, ಇದೇನೊ ಇದೆಂತೊ? ಗುಹೇಶ್ವರನೊಬ್ಬ ತಪ್ಪಿಸಿ ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು!