ವಚನ - 980     
 
ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ, ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ? ಎರಡರ ಎಂಟೆರಡರ, ಆರರ, ನಾಲ್ಕೆರಡರ ಶರಧಿ ಶರಧಿಯ ಕೂಡಿ ಮೊರೆವುದಿದೇನೊ? ಕುರುಡ ಹೆಳವನ ಕೈವಿಡಿದು ನಡೆವಂತೆ, ಗುಹೇಶ್ವರನೆಂಬ ಲಿಂಗನಿರಾಳದ ನಿಲುವು.