ವಚನ - 15     
 
ಅಂಜನದಗಿರಿ ರಂಜಿಸುತ್ತಿದೆ ಆಯತವಿಡಿದು ಸುಖವ ಕಂಡು ಅನುಭವದವಳಿಗೆ[ಮಾಣಿಕ್ಯ] ವರ್ಣವನೇಕೀಕರಿಸಿ ನೋಡಲು ಅನುವಾಯಿತ್ತಯ್ಯ ಅಂಜನದ ಹತ್ತೆಸಳಪೀಠ. ಆ ಪೀಠದಲ್ಲಿ ಭೃತ್ಯನೆಂಬವ ನಿಂದು ಲಿಂಗವಿಡಿದು ನಡೆಯೆ ಉರಿ ನಂದಿ ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯ, ಚೆನ್ನಬಸವಣ್ಣನಿಂದ ಬದುಕಿದೆನು.