ವಚನ - 89     
 
ಅಯ್ಯಾ, ನೀನಾಡುವ ಹೊಲನ, ನೀನಿಪ್ಪ ಇರವ ಕಂಡೆನೆಂಬ ಸಿದ್ಧರೆಲ್ಲ ನಿಸ್ಸಿದ್ಧರಾದರು. ಆದಿಮಧ್ಯಾವಸಾನರನು ಭೇದಿಸುವ ಭೇದವನು ಸಾಧಿಸುವ ತರ್ಕವನು ತಂತ್ರಗಳ ತನುಗುಣ ಮಲತ್ರಯಂಗಳನತಿಗಳೆದು ಅನುಗುಣವ ಕೊಡಯ್ಯ ಕಪಿಲಸಿದ್ಧಮಲ್ಲಿಕಾರ್ಜುನ.