ವಚನ - 97     
 
ಅಯ್ಯಾ, ಬ್ರಹ್ಮದಲ್ಲಿ ಅಯ್ಯಾ ನೀನು ಅತಿಶಯ ಜ್ಯೋತಿರ್ಮಯನು. ಆನಂದ ಸ್ಥಾನದಲ್ಲಿ ಅಯ್ಯಾ ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯ ಗುರುವಿನ ಕರುಣದಿಂದ ಎನ್ನ ಕರಸ್ಥಲದಲ್ಲಿ ಸಿಕ್ಕಿ ಒಳಗಾದೆ ಶಿವನ ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.