ವಚನ - 106     
 
ಅಯ್ಯಾ, ಹಿಂದೆ ನಾ ಬಂದ ಹಲವು ಭವ ಸಾಲದೆ? ಏಕೆ ಕಾಡುವೆಯಯ್ಯಾ. ಹಿಂದೆ ನಿನ್ನನರಿಯದೆ ದಾನವರಾಗಿ ಹಲವು ಭವದಲ್ಲಿ ಕುಡಿದು ಆನುಂಡ ನರಕವ ನೀನರಿಯ. ಅರಿದರಿದೆನ್ನ ಕಾಡುವರೆ? ಅಯ್ಯಾ, ನಾನು ಬಂದ ಸುಖಂಗಳಲ್ಲಿ ನಿನ್ನನರಿಯದ ಕಾರಣದಲ್ಲಿ ನೀನಿಕ್ಕಿದೆ ನರಕಲ್ಲಿ, ಆನದನುಣ್ಣದಿದ್ದಡೆ ಎನ್ನ ವಶವೆ? ಕಪಿಲಸಿದ್ಧಮಲ್ಲಿಕಾರ್ಜುನ.