ವಚನ - 130     
 
ಆಗಮದ ಅನು ನಿಯಮದ ಸಂದೇಹ, ಯೋಗದ ಭ್ರಾಂತು ಕ್ರೀಯ ಸಂಕಲ್ಪ, ನಷ್ಟದ ಚಿಂತೆ ಈ ಪಂಚಮಹಾಪಾತಕವುಳ್ಳಾತ ಭಕ್ತಿಯ ನಿಯಮಿಗನಲ್ಲ. ಚಿಂತೆ, ಸಂಕಲ್ಪ, ಭ್ರಾಂತು, ಸಂದೇಹ, ಅನುವಿನ ಗುಣವಳಿದು ತಾನಾದಡೆ, ತಾನೆ ನಿತ್ಯ ಕಾಣಾ, ಕಪಿಲಸಿದ್ಧಮಲ್ಲಿನಾಥಾ.