ವಚನ - 133     
 
ಆ ಜ್ಞಾನಸಿದ್ಧನ ಆನಂದಸ್ಥಾನದಲ್ಲಿ ಕಂಡೆ, ಒಪ್ಪಿರ್ದ ಶುದ್ಧ ಸಿಂಹಾಸನಾರೂಢನಾಗಿ, ಒಪ್ಪಿರ್ದ ಅಪರ ಮಧ್ಯ ಪೂರ್ವವೆಂಬ ಹೋಬಳಿಗೆ ತಾನೆ ಹೊಲಬಿಗನಾಗಿ, ಬಂದವರನೊಳಕೊಂಡು ಬಹವರನು ಕರೆವುತ್ತ, ಬಾರದವರನೇಡಿಸುತ್ತ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅಜ್ಞಾನಭರಿತವಾಗಿ ಇದ್ದಾನು.