ವಚನ - 139     
 
ಆಚಾರ ಪ್ರಾಣವಾದ ಬಳಿಕ ಅನ್ಯಕ್ಕೆರಗದಿರಬೇಕು. ಅರಿಷಡ್ವರ್ಗಂಗಳು ಒಳಗಾದ ಕರಣಂಗಳ ಕರವಾಗಿ ಅರ್ಚಿಸಬೇಕು. ಆತನೀಗ ಲಿಂಗೈಕ್ಯ. ಆತನೀಗ ಪಾದೋದಕ ಪ್ರಮಾಣನರಿದಾತ. ಭಕ್ತಿಯ ತಾತ್ಪರಿಯವನರಿದಾತ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತಾತ್ಪರ್ಯವಾದಾತ.