ವಚನ - 138     
 
ಆಚಾರ ಪ್ರಾಣವಾದಡೆ ಅನ್ಯಕ್ಕೆರಗದಿರಬೇಕು. ಪ್ರಾಣಲಿಂಗ ಸಂಬಂಧಿಯಾದ ಬಳಿಕ ಕಾಯಕ್ಕಳಿವಿಲ್ಲದಿರಬೇಕು. ಐಕ್ಯನಾದ ಬಳಿಕ ಸಕಲ ನಿಷ್ಕಲದಲ್ಲಿ ಪೂರ್ಣನಾಗಿರಬೇಕು. ಇನಿತು ಉಳ್ಳಡೆ ಅವನೈಕ್ಯ, ಅಲ್ಲದಿದ್ದಡೆ ಆತನಭ್ಯಾಸಿ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇಂಥವರನೊಲಿವ ಅಂಥವರನೊಲ್ಲ.