ವಚನ - 146     
 
ಆದ್ಯಕ್ಷರದ ಭೇದವನರಿದೆನೆಂಬ ಯೋಗಿ ನೀ ಕೇಳಾ: ಆದಿಗೆ ಅನಾದಿ ಅಂತ್ಯವಾಗಿಪ್ಪುದು, ನಿತ್ಯವು ತಾ, ನಿನಗರಿಯಬಪ್ಪುದೆ? ಆದಿಯ ನಾದದ ಆಮೋದವನು ಭೇದಿಸಿ ಹಿಡಿದಾತ ಸಾಧಕ ಸಿದ್ಧನೆ? ಅಲ್ಲ, ಆತ ಸುಸಿದ್ಧ! ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಅನಾಹತಬ್ರಹ್ಮದಲ್ಲಿ ಆಂದೋಳನು.