ವಚನ - 229     
 
ಇಂತಪ್ಪ ಘನತರಲಿಂಗವ ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ, ಪಾದೋದಕ ಪ್ರಸಾದವ ಕೊಳ್ಳದೆ, ಯೋಗವೆಂದು ಅದ್ವೈತವೆಂದು ಭಂಡನೆ ಬಳಸುತಿಪ್ಪ ಮಿಟ್ಟೆಯ ಭಂಡರನೇನೆಂಬೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.