ವಚನ - 234     
 
ಇಂದ್ರಿಯಾರ್ಪಣ ಸುಖಾರ್ಪಣವಾಯಿತ್ತಯ್ಯಾ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ನಿಜಾರ್ಪಣವಾಯಿತ್ತಯ್ಯಾ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಕಪಿಲಸಿದ್ಧಮಲ್ಲಿನಾಥಯ್ಯ, ನಿಮಗೆ ಚೈತನ್ಯ.